ಯುದ್ಧಕ್ಕೆ ಬರಲಿದ್ದಾರೆ – ಅಜೇಯ ಸೈನಿಕರು

ಯುದ್ಧಕ್ಕೆ ಬರಲಿದ್ದಾರೆ – ಅಜೇಯ ಸೈನಿಕರು

ಚಿತ್ರ: ಮಥಿಯಸ್ ವೇವರಿಂಗ್
ಚಿತ್ರ: ಮಥಿಯಸ್ ವೇವರಿಂಗ್

ಐತಿಹಾಸಿಕ ಕಾಲದಿಂದ ಹಿಡಿದು ಇಂದಿನವರೆಗೂ ಸೋಲಿನ ಕಹಿಯನ್ನು ಅನುಭವಿಸಿದ ಆಥವಾ ದೂರದಿಂದ ಕಂಡು ಪಲಾಯನ ಗೈಯ್ಯುವ ಸೈನಿಕರು ಸರ್ವೇ ಸಾಮಾನ್ಯ. ಆದರೆ ಸೋಲನ್ನೇ ಆರಿಯದ ಸೈನಿಕರು ಕೆಲವೇ ವರ್ಷಗಳಲ್ಲಿ ರಣರಂಗಕ್ಕೆ ಧುಮುಕಲಿದ್ದಾರೆ ಎಂದರೆ ಆಶ್ಚರ್ಯ ಮತ್ತು ಸಂತೋಷದ ಸಂಗತಿಯೇ. ಮಾನವ ಸಹಜವಾದ ಸೋಲು ಗೆಲುವು ಭೂಮಿಯಲ್ಲಿ ಇದ್ದದ್ದೆ ಆದರೆ ಮಾನವರೇ ಅಲ್ಲದೆ ಮಾನವರಂತೆ ಯುದ್ಧ ವೈಖರಿಯಲ್ಲಿ ತೊಡಗುವ ಸೋಲನ್ನು ಅರಿಯದ ಸೈನಿಕರು ಸಿಕ್ಕುವುದೆಂದರೆ ಮನುಷ್ಯರಲ್ಲದೆ ರಾಕ್ಷಸರೆ!? ರಾಕ್ಷಸಿ ಶಕ್ತಿಯುಳ್ಳ ಮನುಷ್ಯರಲ್ಲದ ರೋಬಟ್ ಸೈನಿಕರಿಂದಲೇ ಈ ಸಾಧನೆ ನಿಜ, ಮಾನವ ಶಕ್ತಿಯ ಹತ್ತಾರುಪಟ್ಟು ಹೆಚ್ಚಿನ ಶಕ್ತಿಯನ್ನು ಹೊಂದಿದ ರೋಬಟ್ ಮಾನವರು ಈಗಾಗಲೇ ಫ್ಯಾಕ್ಟರಿಗಳಲ್ಲಿ ವಿದೇಶಿ ಅಡುಗೆ ಮನೆಗಳಲ್ಲಿ ಕೆಲಸ ನಿರ್ವಹಿಸುತ್ತಲಿವೆ. ಹತ್ತು ಜನ ಮಾಡುವ ಕೆಲಸವನ್ನು ಒಬ್ಬ ರೋಬಟ್ ಮನುಷ್ಯ ಕೆಲವೇ ಘಂಟೆಗಳಲ್ಲಿ ಮಾಡುವುದಾದರೆ ೧೦ ಜನ ಸೈನಿಕರಿಗೆ ತರಬೇತಿ ನೀಡಿ ಅವರ ಸಂಬಳ ಸಾರಿಗೆ, ಇತರೆ ಖರ್ಚುಗಳನ್ನೆಲ್ಲ ನಿಭಾಯಿಸುವುದಕ್ಕಿಂತಲೂ ಒಬ್ಬ ರೋಬನನ್ನು ಯುದ್ಧಕ್ಕೆ ತೊಡಗಿಸಿದರೆ ಎದುರಿಗಿದ್ದ ಮನುಷ್ಯ ಸೈನಿಕರಾಗಲಿ, ಮದ್ದು ಗುಂಡುಗಳಾಗಲಿ ಎಲ್ಲವೂ ಸಪಾಟ್ ಆಗುತ್ತದೆ!!

ಅಮೇರಿದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾದ ಜೆಟ್ ಪ್ರೊಪುಲಶನ್ ಪ್ರಯೋಗಾಲಯ ಇದಕ್ಕಾಗಿ ಅಭಿವೃದ್ದಿ ಪಡಿಸಿದ ಯಂತ್ರಜ್ಞಾನವನ್ನು
ಬೆಳೆಸಿಕೊಂಡಿದೆ. ಮನೆಗೆಲಸಕ್ಕಾಗಿ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವಂತೆ ಯುದ್ಧದಲ್ಲಿಯೂ ಕೂಡ ಕೈಯಲ್ಲಿ ಪಿಸ್ತೂಲು, ರೈಫಲ್‌ಗಳ ಗುಂಡಿ ಅದುಮುವ, ಮುಂದೆ ಮುಂದೆ ನುಗ್ಗುವ, ಗಂಡು ಖಾಲಿಯಾದಾಗ ತುಂಬುವ, ಮತ್ತು ಗುರಿ ಇಟ್ಟು ಶತೃಸೈನ್ಯವನ್ನು ನಾಶಪಡಿಸುವ ಯಾಂತ್ರೀಕೃತ ಯಂತ್ರಗಳನ್ನಳವಡಿಸಿದ ರೋಬಟ್‌ಗಳನ್ನು ಸಿದ್ಧಗೊಳಿಸುತ್ತಿದೆ. ರೋಬಟ್ ಸೈನಿಕರು ಭಾರವಿರದೆ ಹಗುರವಾಗಿದ್ದು ಸುಲಭವಾಗಿ ಚಲಿಸುತ್ತವೆಯಂತೆ
ಇವುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಬಹುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನಗರ್ಥವಾಗುವುದಿಲ್ಲ
Next post ದಾರಿ ಬಿಡಿ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

cheap jordans|wholesale air max|wholesale jordans|wholesale jewelry|wholesale jerseys